ಮೂಢನಂಬಿಕೆ ಅಳಿಯಬೇಕಾಗಿದೆ
ಪ್ರದೀಪ್ ಮಾಲ್ಗುಡಿ
ಇತ್ತೀಚೆಗೆ ಚಿಕ್ಕಮಗಳೂರು ಜಲ್ಲೆಯ ರಂಭಾಪುರಿಯಲ್ಲಿ ನಡೆದ ಅಡ್ಡಪಲ್ಲಕ್ಕಿ ಉತ್ಸವ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯದಲ್ಲಿ ನಡೆದ ಮಡೆಸ್ನಾನ, ಹೃದಯಭಾಗವಾದ ದಾವಣಗೆರೆಯಲ್ಲಿ ನಡೆದ ಅರೆಬೆತ್ತಲೆ ಸೇವೆ ಹಾಗೂ ಉತ್ತರ ಕರ್ನಾಟಕದ ಕೊಪ್ಪಳದಲ್ಲಿ ನಡೆದ ಮುತ್ತುಕಟ್ಟುವ ಮೌಢ್ಯಾಚರಣೆಗಳು ಕರ್ನಾಟಕದ ವೈಚಾರಿಕ ಪ್ರಜ್ಞೆಗೆ ಕನ್ನಡಿ ಹಿಡಿದಿವೆ.
ಪುರೋಹಿತಶಾಹಿ ವ್ಯವಸ್ಥೆಯ ಯಥಾಸ್ಥಿತಿ ವಾದವನ್ನು ಕಾಪಿಡುವ ಹಾಗೂ ನಿರಂತರ ಮುಂದುವರಿಸುವ ಉದ್ದೇಶಕ್ಕಾಗಿ ತಳಸಮುದಾಯಗಳನ್ನು ನಿರಂತರವಾಗಿ ಬಳಸಿಕೊಳ್ಳಲಾಗಿದೆ. ಧಾರ್ಮಿಕ ವೇಷದ ಹಾಗೂ ಬಹುಸಂಖ್ಯಾತರ ಆತ್ಮಗೌರವವನ್ನು ಕುಂದಿಸುವ ಈ ಮೂಢನಂಬಿಕೆಗಳನ್ನು ನಿಷೇಧಿಸಬೇಕಾಗಿದೆ. ಆದರೆ, ರಾಜ್ಯ ಸರ್ಕಾರದ ಉದ್ದೇಶಿತ ಮೂಢನಂಬಿಕೆ ವಿರೋಧಿ ಕಾನೂನನ್ನು ಹೆಚ್ಚಿನ ಮಾಧ್ಯಮಗಳು ಅಪವ್ಯಾಖ್ಯಾನಕ್ಕೆ ಒಳಪಡಿಸಿದವು. ಅಂತಿಮವಾಗಿ ಇದರ ಲಾಭ ಪಡೆದದ್ದು ಜ್ಯೋತಿಷಿಗಳು. ವಾಸ್ತು, ದಿನಭವಿಷ್ಯ, ವಾರಭವಿಷ್ಯ, ವಾರ್ಷಿಕ ಭವಿಷ್ಯ, ಹೋಮ, ಹವನ, ಶಾಂತಿಗಳ ಹೆಸರಿನಲ್ಲಿ ಅಮಾಯಕ ಜನರನ್ನು ಮೋಸಗೊಳಿಸಲಾಗುತ್ತಿದೆ.
ಶಿವರಾಮ ಕಾರಂತ, ಎಚ್.ನರಸಿಂಹಯ್ಯ, ಕುವೆಂಪು, ಲಂಕೇಶ್, ತೇಜಸ್ವಿ, ನಂಜುಂಡಸ್ವಾಮಿ ಹಾಗೂ ರಾಮದಾಸ್ರಂತಹ ವ್ಯಕ್ತಿಗಳ ಕೊರತೆಯನ್ನು ಈ ಪ್ರಸಂಗಗಳು ಎತ್ತಿತೋರಿವೆ. ಯವಜನಾಂಗವು ಇಂತಹ ಸಂಕೀರ್ಣ ಸನ್ನಿವೇಶಗಳನ್ನು ವಸ್ತುನಿಷ್ಟವಾಗಿ ಮುಖಾಮುಖಿಯಾಗಬೇಕಾಗಿದೆ. ಇವುಗಳ ವಿರುದ್ಧ ಜನಾಭಿಪ್ರಾಯ ಮೂಡಿಸಬೇಕಾದ ಅವಶ್ಯಕತೆಯನ್ನು ಸರ್ಕಾರಗಳು ಹಾಗೂ ಮಾಧ್ಯಮಗಳು ತ್ವರಿತವಾಗಿ ಮನಗಾಣಬೇಕಾಗಿದೆ.
ಪ್ರದೀಪ್ ಮಾಲ್ಗುಡಿ
ಇತ್ತೀಚೆಗೆ ಚಿಕ್ಕಮಗಳೂರು ಜಲ್ಲೆಯ ರಂಭಾಪುರಿಯಲ್ಲಿ ನಡೆದ ಅಡ್ಡಪಲ್ಲಕ್ಕಿ ಉತ್ಸವ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯದಲ್ಲಿ ನಡೆದ ಮಡೆಸ್ನಾನ, ಹೃದಯಭಾಗವಾದ ದಾವಣಗೆರೆಯಲ್ಲಿ ನಡೆದ ಅರೆಬೆತ್ತಲೆ ಸೇವೆ ಹಾಗೂ ಉತ್ತರ ಕರ್ನಾಟಕದ ಕೊಪ್ಪಳದಲ್ಲಿ ನಡೆದ ಮುತ್ತುಕಟ್ಟುವ ಮೌಢ್ಯಾಚರಣೆಗಳು ಕರ್ನಾಟಕದ ವೈಚಾರಿಕ ಪ್ರಜ್ಞೆಗೆ ಕನ್ನಡಿ ಹಿಡಿದಿವೆ.
ಪುರೋಹಿತಶಾಹಿ ವ್ಯವಸ್ಥೆಯ ಯಥಾಸ್ಥಿತಿ ವಾದವನ್ನು ಕಾಪಿಡುವ ಹಾಗೂ ನಿರಂತರ ಮುಂದುವರಿಸುವ ಉದ್ದೇಶಕ್ಕಾಗಿ ತಳಸಮುದಾಯಗಳನ್ನು ನಿರಂತರವಾಗಿ ಬಳಸಿಕೊಳ್ಳಲಾಗಿದೆ. ಧಾರ್ಮಿಕ ವೇಷದ ಹಾಗೂ ಬಹುಸಂಖ್ಯಾತರ ಆತ್ಮಗೌರವವನ್ನು ಕುಂದಿಸುವ ಈ ಮೂಢನಂಬಿಕೆಗಳನ್ನು ನಿಷೇಧಿಸಬೇಕಾಗಿದೆ. ಆದರೆ, ರಾಜ್ಯ ಸರ್ಕಾರದ ಉದ್ದೇಶಿತ ಮೂಢನಂಬಿಕೆ ವಿರೋಧಿ ಕಾನೂನನ್ನು ಹೆಚ್ಚಿನ ಮಾಧ್ಯಮಗಳು ಅಪವ್ಯಾಖ್ಯಾನಕ್ಕೆ ಒಳಪಡಿಸಿದವು. ಅಂತಿಮವಾಗಿ ಇದರ ಲಾಭ ಪಡೆದದ್ದು ಜ್ಯೋತಿಷಿಗಳು. ವಾಸ್ತು, ದಿನಭವಿಷ್ಯ, ವಾರಭವಿಷ್ಯ, ವಾರ್ಷಿಕ ಭವಿಷ್ಯ, ಹೋಮ, ಹವನ, ಶಾಂತಿಗಳ ಹೆಸರಿನಲ್ಲಿ ಅಮಾಯಕ ಜನರನ್ನು ಮೋಸಗೊಳಿಸಲಾಗುತ್ತಿದೆ.
ಶಿವರಾಮ ಕಾರಂತ, ಎಚ್.ನರಸಿಂಹಯ್ಯ, ಕುವೆಂಪು, ಲಂಕೇಶ್, ತೇಜಸ್ವಿ, ನಂಜುಂಡಸ್ವಾಮಿ ಹಾಗೂ ರಾಮದಾಸ್ರಂತಹ ವ್ಯಕ್ತಿಗಳ ಕೊರತೆಯನ್ನು ಈ ಪ್ರಸಂಗಗಳು ಎತ್ತಿತೋರಿವೆ. ಯವಜನಾಂಗವು ಇಂತಹ ಸಂಕೀರ್ಣ ಸನ್ನಿವೇಶಗಳನ್ನು ವಸ್ತುನಿಷ್ಟವಾಗಿ ಮುಖಾಮುಖಿಯಾಗಬೇಕಾಗಿದೆ. ಇವುಗಳ ವಿರುದ್ಧ ಜನಾಭಿಪ್ರಾಯ ಮೂಡಿಸಬೇಕಾದ ಅವಶ್ಯಕತೆಯನ್ನು ಸರ್ಕಾರಗಳು ಹಾಗೂ ಮಾಧ್ಯಮಗಳು ತ್ವರಿತವಾಗಿ ಮನಗಾಣಬೇಕಾಗಿದೆ.
No comments:
Post a Comment