ಚುನಾವಣಾ ಪ್ರಣಾಳಿಕೆ
- ಪ್ರದೀಪ್ ಮಾಲ್ಗುಡಿ
ಇದೀಗ ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಭರದಿಂದ ಲೋಕಸಭಾ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿವೆ. ಒಂದು ಹಂತದ ಅಭ್ಯರ್ಥಿಗಳ ಪಟ್ಟಿಯನ್ನೂ ಈಗಾಗಲೆ ಬಿಡುಗಡೆ ಮಾಡಿವೆ. ಇನ್ನು ಅಧಿಕಾರವನ್ನು ಹಿಡಿಯಲು ಭರವಸೆಗಳ ಮಹಾಪೂರವನ್ನೇ ಹರಿಸಲು ಪ್ರಣಾಳಿಕೆಗಳ ಬಿಡುಗಡೆಯ ಸಮಯವಿದು. ಅನುಷ್ಠಾನಯೋಗ್ಯ ಭರವಸೆಗಳನ್ನಷ್ಟೇ ಘೋಷಿಸಿದಲ್ಲಿ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವುದು ಕಷ್ಟವೆಂದು ಭಾವಿಸುವ ರಾಜಕೀಯ ಪಕ್ಷಗಳು; ಈ ಸಂದರ್ಭದಲ್ಲಿ ಭರವಸೆಗಳ ಅತಿವೃಷ್ಟಿಯನ್ನೇ ಸುರಿಸುತ್ತವೆ. ಆದರೆ, ಚುನಾವಣಾ ನಂತರ ಈ ಭರವಸೆಗಳನ್ನು ಘೋಷಿಸಿದವರು ಹಾಗೂ ಕೇಳಿ, ನಂಬಿ ಮತ ಹಾಕಿದವರು ಮತ್ತು ಇವರಿಬ್ಬರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮಗಳು ಬಹುತೇಕ ಈ ವಿಷಯಗಳನ್ನು ಮರೆತುಬಿಡುತ್ತವೆ. ಕಳೆದ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಕಾಂಗ್ರೆಸ್ ಘೋಷಿಸಿದ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಯಾವ ಹಂತದಲ್ಲಿ ಜಾರಿಗೆ ತಂದಿದೆ? ಎಂದು ಪ್ರಶ್ನಿಸಿದರೆ ಉತ್ತರ ಕೊಡಲು ಯಾರಿಗೆ ಪ್ರಶ್ನೆ ಕೇಳಬೇಕೆಂಬ ಗೊಂದಲ ಶುರುವಾಗುತ್ತದೆ.
- ಪ್ರದೀಪ್ ಮಾಲ್ಗುಡಿ
ಇದೀಗ ಎಲ್ಲ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಭರದಿಂದ ಲೋಕಸಭಾ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿವೆ. ಒಂದು ಹಂತದ ಅಭ್ಯರ್ಥಿಗಳ ಪಟ್ಟಿಯನ್ನೂ ಈಗಾಗಲೆ ಬಿಡುಗಡೆ ಮಾಡಿವೆ. ಇನ್ನು ಅಧಿಕಾರವನ್ನು ಹಿಡಿಯಲು ಭರವಸೆಗಳ ಮಹಾಪೂರವನ್ನೇ ಹರಿಸಲು ಪ್ರಣಾಳಿಕೆಗಳ ಬಿಡುಗಡೆಯ ಸಮಯವಿದು. ಅನುಷ್ಠಾನಯೋಗ್ಯ ಭರವಸೆಗಳನ್ನಷ್ಟೇ ಘೋಷಿಸಿದಲ್ಲಿ ಚುನಾವಣೆಯಲ್ಲಿ ಮತದಾರರನ್ನು ಸೆಳೆಯುವುದು ಕಷ್ಟವೆಂದು ಭಾವಿಸುವ ರಾಜಕೀಯ ಪಕ್ಷಗಳು; ಈ ಸಂದರ್ಭದಲ್ಲಿ ಭರವಸೆಗಳ ಅತಿವೃಷ್ಟಿಯನ್ನೇ ಸುರಿಸುತ್ತವೆ. ಆದರೆ, ಚುನಾವಣಾ ನಂತರ ಈ ಭರವಸೆಗಳನ್ನು ಘೋಷಿಸಿದವರು ಹಾಗೂ ಕೇಳಿ, ನಂಬಿ ಮತ ಹಾಕಿದವರು ಮತ್ತು ಇವರಿಬ್ಬರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮಗಳು ಬಹುತೇಕ ಈ ವಿಷಯಗಳನ್ನು ಮರೆತುಬಿಡುತ್ತವೆ. ಕಳೆದ ಲೋಕಸಭಾ ಚುನಾವಣೆಯ ಅವಧಿಯಲ್ಲಿ ಕಾಂಗ್ರೆಸ್ ಘೋಷಿಸಿದ ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಯಾವ ಹಂತದಲ್ಲಿ ಜಾರಿಗೆ ತಂದಿದೆ? ಎಂದು ಪ್ರಶ್ನಿಸಿದರೆ ಉತ್ತರ ಕೊಡಲು ಯಾರಿಗೆ ಪ್ರಶ್ನೆ ಕೇಳಬೇಕೆಂಬ ಗೊಂದಲ ಶುರುವಾಗುತ್ತದೆ.
No comments:
Post a Comment