ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಬೇಡಿ
- ಪ್ರದೀಪ್ ಮಾಲ್ಗುಡಿ
ಕರ್ನಾಟಕದ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ಶಿಕ್ಷಣವನ್ನು ಉದ್ದಿಮೆಯೆಂದು ತಿಳಿದು ತಮ್ಮ ಕಾಲೇಜುಗಳಲ್ಲಿ ಸರ್ಕಾರಕ್ಕೆ ಬರೆದು ಕೊಟ್ಟಿರುವ ಮುಚ್ಚಳಿಕೆಯನ್ನು ಉಲ್ಲಂಘಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರಬೇಕೆಂದು ನಿಲುವನ್ನು ಮಂಡಿಸುತ್ತಿರುವ ಹೊತ್ತಿನಲ್ಲಿ ತಮ್ಮ ಸಹೋದ್ಯೋಗಿಗಳ ಒಡೆತನದ ಕಾಲೇಜುಗಳು ವೈದ್ಯಕೀಯ ಸೀಟು ಹಂಚಿಕೆಯ ಸಮಯದಲ್ಲಿ ಮೀಸಲಾತಿಯನ್ನು ಉಲ್ಲಂಘಿಸಿದ್ದಾರೆ.
ಶಿಕ್ಷಣವು ವ್ಯಾಪಾರೀ ಉದ್ದೇಶಗಳಿಂದ ಈಗಾಗಲೇ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ. ನೈತಿಕತೆಯನ್ನು ಯಾವ ಶಿಕ್ಷಣ ಸಂಸ್ಥೆಗಳೂ ಬೋಧಿಸಲಾರದಷ್ಟು ಈ ಕ್ಷೇತ್ರ ಹದಗೆಟ್ಟಿದೆ. ಏಕೆಂದರೆ, ಇಲ್ಲಿ ಶಿಕ್ಷಣ ಮಾರಾಟದ ಸರಕಾಗಿ ಬದಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ತಮ್ಮ ಕಬಂಧ ಬಾಹುಗಳನ್ನು ವಿಸ್ತರಿಸಿವೆ. ಈ ಎಲ್ಲ ಹಂತಗಳಲ್ಲಿ ತಮಗೆ ಬೇಕಾದಂತೆ ಶುಲ್ಕ ವಸೂಲಾತಿಯನ್ನು ಅವ್ಯಾಹತವಾಗಿ ನಡೆಸಿದ್ದಾರೆ. ಸರ್ಕಾರಕ್ಕೇ ಶೆಡ್ಡು ಹೊಡೆಯುವಷ್ಟು ಈ ಸಂಸ್ಥೆಗಳು ಪ್ರಬಲವಾಗಿವೆ ಹಾಗೂ ಚೆನ್ನಾಗಿ ತಿಂದು ಸೊಕ್ಕಿವೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಬಹುತೇಕ ವಿದ್ಯಾಸಂಸ್ಥೆಗಳ ಒಡೆತನ ರಾಜಕಾರಣಿಗಳು, ಮಠಗಳು ಹಾಗೂ ಉದ್ಯಮಿಗಳ ಕೈಯಲ್ಲಿದೆ. ಈ ಕಾರಣದಿಂದ ಸರ್ಕಾರವಾಗಲೀ ಅಧಿಕಾರಿಗಳಾಗಲೀ ಏನನ್ನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿವೆ.
ಒಮ್ಮೆ ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ್ ಅವರು ಪ್ರಾಥಮಿಕ ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದಿದ್ದರು. ಆದರೆ, ಅದು ದೂರದ ಬೆಟ್ಟ. ಏಕೆಂದರೆ, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಮಠಾಧಿಪತಿಗಳನ್ನು ಎದುರು ಹಾಕಿಕೊಂಡು ಈ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವುದು ಅಸಾಧ್ಯದ ಕೆಲಸವಾಗಿದೆ. ಆದರೆ ಈಗ ನಮ್ಮ ಮುಂದಿರುವ ಸಮಸ್ಯೆ ಸಾಮಾಜಿಕ ನ್ಯಾಯದ ಪರವಾಗಿ ಬಡಬಡಿಸುವ ರಾಜಕಾರಣಿಗಳು ಹಾಗೂ ಮಠಾಧಿಪತಿಗಳ ಒಡೆತನದ ಶಾಲಾ-ಕಾಲೇಜಿನಲ್ಲಿ ನಡೆದಿರುವ ಅನ್ಯಾಯಗಳನ್ನು ಏನೆಂದು ವ್ಯಾಖ್ಯಾನಿಸುವುದು?
- ಪ್ರದೀಪ್ ಮಾಲ್ಗುಡಿ
ಕರ್ನಾಟಕದ ಕೆಲವು ಖಾಸಗಿ ವ್ಯಕ್ತಿಗಳು ಹಾಗೂ ರಾಜಕಾರಣಿಗಳು ಶಿಕ್ಷಣವನ್ನು ಉದ್ದಿಮೆಯೆಂದು ತಿಳಿದು ತಮ್ಮ ಕಾಲೇಜುಗಳಲ್ಲಿ ಸರ್ಕಾರಕ್ಕೆ ಬರೆದು ಕೊಟ್ಟಿರುವ ಮುಚ್ಚಳಿಕೆಯನ್ನು ಉಲ್ಲಂಘಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರಬೇಕೆಂದು ನಿಲುವನ್ನು ಮಂಡಿಸುತ್ತಿರುವ ಹೊತ್ತಿನಲ್ಲಿ ತಮ್ಮ ಸಹೋದ್ಯೋಗಿಗಳ ಒಡೆತನದ ಕಾಲೇಜುಗಳು ವೈದ್ಯಕೀಯ ಸೀಟು ಹಂಚಿಕೆಯ ಸಮಯದಲ್ಲಿ ಮೀಸಲಾತಿಯನ್ನು ಉಲ್ಲಂಘಿಸಿದ್ದಾರೆ.
ಶಿಕ್ಷಣವು ವ್ಯಾಪಾರೀ ಉದ್ದೇಶಗಳಿಂದ ಈಗಾಗಲೇ ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ. ನೈತಿಕತೆಯನ್ನು ಯಾವ ಶಿಕ್ಷಣ ಸಂಸ್ಥೆಗಳೂ ಬೋಧಿಸಲಾರದಷ್ಟು ಈ ಕ್ಷೇತ್ರ ಹದಗೆಟ್ಟಿದೆ. ಏಕೆಂದರೆ, ಇಲ್ಲಿ ಶಿಕ್ಷಣ ಮಾರಾಟದ ಸರಕಾಗಿ ಬದಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ತಮ್ಮ ಕಬಂಧ ಬಾಹುಗಳನ್ನು ವಿಸ್ತರಿಸಿವೆ. ಈ ಎಲ್ಲ ಹಂತಗಳಲ್ಲಿ ತಮಗೆ ಬೇಕಾದಂತೆ ಶುಲ್ಕ ವಸೂಲಾತಿಯನ್ನು ಅವ್ಯಾಹತವಾಗಿ ನಡೆಸಿದ್ದಾರೆ. ಸರ್ಕಾರಕ್ಕೇ ಶೆಡ್ಡು ಹೊಡೆಯುವಷ್ಟು ಈ ಸಂಸ್ಥೆಗಳು ಪ್ರಬಲವಾಗಿವೆ ಹಾಗೂ ಚೆನ್ನಾಗಿ ತಿಂದು ಸೊಕ್ಕಿವೆ. ಈ ಶಿಕ್ಷಣ ಸಂಸ್ಥೆಗಳಲ್ಲಿ ಬಹುತೇಕ ವಿದ್ಯಾಸಂಸ್ಥೆಗಳ ಒಡೆತನ ರಾಜಕಾರಣಿಗಳು, ಮಠಗಳು ಹಾಗೂ ಉದ್ಯಮಿಗಳ ಕೈಯಲ್ಲಿದೆ. ಈ ಕಾರಣದಿಂದ ಸರ್ಕಾರವಾಗಲೀ ಅಧಿಕಾರಿಗಳಾಗಲೀ ಏನನ್ನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿವೆ.
ಒಮ್ಮೆ ಪ್ರಾಥಮಿಕ ಶಿಕ್ಷಣ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ್ ಅವರು ಪ್ರಾಥಮಿಕ ಶಿಕ್ಷಣ ಕ್ಷೇತ್ರವನ್ನು ರಾಷ್ಟ್ರೀಕರಣಗೊಳಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದಿದ್ದರು. ಆದರೆ, ಅದು ದೂರದ ಬೆಟ್ಟ. ಏಕೆಂದರೆ, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಮಠಾಧಿಪತಿಗಳನ್ನು ಎದುರು ಹಾಕಿಕೊಂಡು ಈ ಶಿಕ್ಷಣ ಸಂಸ್ಥೆಗಳನ್ನು ರಾಷ್ಟ್ರೀಕರಣಗೊಳಿಸುವುದು ಅಸಾಧ್ಯದ ಕೆಲಸವಾಗಿದೆ. ಆದರೆ ಈಗ ನಮ್ಮ ಮುಂದಿರುವ ಸಮಸ್ಯೆ ಸಾಮಾಜಿಕ ನ್ಯಾಯದ ಪರವಾಗಿ ಬಡಬಡಿಸುವ ರಾಜಕಾರಣಿಗಳು ಹಾಗೂ ಮಠಾಧಿಪತಿಗಳ ಒಡೆತನದ ಶಾಲಾ-ಕಾಲೇಜಿನಲ್ಲಿ ನಡೆದಿರುವ ಅನ್ಯಾಯಗಳನ್ನು ಏನೆಂದು ವ್ಯಾಖ್ಯಾನಿಸುವುದು?
No comments:
Post a Comment