ಕಾಡ್ಗಿಚ್ಚು ನಂದುವುದೆಂದು?
ಪ್ರದೀಪ್ ಮಾಲ್ಗುಡಿ
ಪ್ರತಿ ಬೇಸಿಗೆಯಲ್ಲೂ ಕರ್ನಾಟಕದ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಕಾಡ್ಗಿಚ್ಚಿನ ಹಾವಳಿ ಶುರುವಾಗುತ್ತದೆ. ಈ ಸಮಸ್ಯೆಗೆ ಅನೇಕ ಪಟ್ಟಭದ್ರ ಹಿತಾಸಕ್ತಿಗಳು ಕಾರಣವಾಗಿರುವಂತಿದೆ. ಏಕೆಂದರೆ, ಕಾಡ್ಗಿಚ್ಚಿನ ಕಾರಣಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿರುವ ವರದಿಗಳ ಆಧಾರದಲ್ಲಿ ಕರ್ನಾಟದಂಥ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚಿನ ಸಾಧ್ಯತೆಗಳು ಕಡಿಮೆ. ಆದರೆ ನಾಗರಹೊಳೆ, ಬಂಡೀಪುರ ಮೊದಲಾದ ಕಾಡುಗಳಲ್ಲಿ ಪ್ರತಿವರ್ಷ ಈ ಅವಘಡ ನಡೆಯುತ್ತಿದೆ.
ಆದರೆ, ಇದರ ಪರಿಣಾಮಕಾರಿ ಪರಿಹಾರೋಪಾಯಗಳು ಮಾತ್ರ ಇಂದಿಗೂ ಮರೀಚಿಕೆಯಾಗಿವೆ. ಅಕ್ಷರಶಃ ಅರಣ್ಯರೋಧನವನ್ನು ಕೇಳುವವರೆ ಇಲ್ಲವಾಗಿದೆ. ಈ ಅವಘಡದಲ್ಲಿ ಅನೇಕ ಅಮೂಲ್ಯ ಹಾಗೂ ಅಪರೂಪದ ಪ್ರಾಣಿ, ಪಕ್ಷಿ ಸಂತತಿ ಮತ್ತು ವೃಕ್ಷ, ಗಿಡಮೂಲಿಕೆಗಳೂ ಬಲಿಯಾಗುತ್ತಿವೆ. ಇವುಗಳಲ್ಲಿ ಬಹುತೇಕ ಅಳಿವಿನಂಚಿನಲ್ಲಿರುವ ಜೀವಸಂಕುಲ. ಪ್ರಾಣಿ, ಪಕ್ಷಿ ಹಾಗೂ ವೃಕ್ಷಸಂಕುಲದ ಅಳಿವಿನ ಸರದಿಯಲ್ಲಿ ಮಾನವನೂ ಇದ್ದಾನೆಂದು ಮನಗಂಡು ನಮ್ಮ ಮುಂದಿನ ಪೀಳಿಗೆಗಾಗಿ ನಾವಿಂದು ಕ್ರಿಯಾಶೀಲವಾಗಬೇಕಿದೆ. ಪ್ರತಿವರ್ಷವೂ ಕೇವಲ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಘೋಷಣೆ ಭರವಸೆಯಾಗಿ ಮಾತ್ರ ಉಳಿದಿದೆ. ಪ್ರಕೃತಿ ಮನುಷ್ಯರ ಎಲ್ಲ ಆಸೆಯನ್ನೂ ಪೂರೈಸಬಲ್ಲದು, ಆದರೆ ದುರಾಸೆಯನ್ನಲ್ಲ ಎಂಬ ಮಹಾತ್ಮ ಗಾಂಧಿಯವರ ಎಚ್ಚರಿಕೆಯನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿದೆ.
ಪ್ರದೀಪ್ ಮಾಲ್ಗುಡಿ
ಪ್ರತಿ ಬೇಸಿಗೆಯಲ್ಲೂ ಕರ್ನಾಟಕದ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಕಾಡ್ಗಿಚ್ಚಿನ ಹಾವಳಿ ಶುರುವಾಗುತ್ತದೆ. ಈ ಸಮಸ್ಯೆಗೆ ಅನೇಕ ಪಟ್ಟಭದ್ರ ಹಿತಾಸಕ್ತಿಗಳು ಕಾರಣವಾಗಿರುವಂತಿದೆ. ಏಕೆಂದರೆ, ಕಾಡ್ಗಿಚ್ಚಿನ ಕಾರಣಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿರುವ ವರದಿಗಳ ಆಧಾರದಲ್ಲಿ ಕರ್ನಾಟದಂಥ ಅರಣ್ಯ ಪ್ರದೇಶಗಳಲ್ಲಿ ಕಾಡ್ಗಿಚ್ಚಿನ ಸಾಧ್ಯತೆಗಳು ಕಡಿಮೆ. ಆದರೆ ನಾಗರಹೊಳೆ, ಬಂಡೀಪುರ ಮೊದಲಾದ ಕಾಡುಗಳಲ್ಲಿ ಪ್ರತಿವರ್ಷ ಈ ಅವಘಡ ನಡೆಯುತ್ತಿದೆ.
ಆದರೆ, ಇದರ ಪರಿಣಾಮಕಾರಿ ಪರಿಹಾರೋಪಾಯಗಳು ಮಾತ್ರ ಇಂದಿಗೂ ಮರೀಚಿಕೆಯಾಗಿವೆ. ಅಕ್ಷರಶಃ ಅರಣ್ಯರೋಧನವನ್ನು ಕೇಳುವವರೆ ಇಲ್ಲವಾಗಿದೆ. ಈ ಅವಘಡದಲ್ಲಿ ಅನೇಕ ಅಮೂಲ್ಯ ಹಾಗೂ ಅಪರೂಪದ ಪ್ರಾಣಿ, ಪಕ್ಷಿ ಸಂತತಿ ಮತ್ತು ವೃಕ್ಷ, ಗಿಡಮೂಲಿಕೆಗಳೂ ಬಲಿಯಾಗುತ್ತಿವೆ. ಇವುಗಳಲ್ಲಿ ಬಹುತೇಕ ಅಳಿವಿನಂಚಿನಲ್ಲಿರುವ ಜೀವಸಂಕುಲ. ಪ್ರಾಣಿ, ಪಕ್ಷಿ ಹಾಗೂ ವೃಕ್ಷಸಂಕುಲದ ಅಳಿವಿನ ಸರದಿಯಲ್ಲಿ ಮಾನವನೂ ಇದ್ದಾನೆಂದು ಮನಗಂಡು ನಮ್ಮ ಮುಂದಿನ ಪೀಳಿಗೆಗಾಗಿ ನಾವಿಂದು ಕ್ರಿಯಾಶೀಲವಾಗಬೇಕಿದೆ. ಪ್ರತಿವರ್ಷವೂ ಕೇವಲ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವ ಘೋಷಣೆ ಭರವಸೆಯಾಗಿ ಮಾತ್ರ ಉಳಿದಿದೆ. ಪ್ರಕೃತಿ ಮನುಷ್ಯರ ಎಲ್ಲ ಆಸೆಯನ್ನೂ ಪೂರೈಸಬಲ್ಲದು, ಆದರೆ ದುರಾಸೆಯನ್ನಲ್ಲ ಎಂಬ ಮಹಾತ್ಮ ಗಾಂಧಿಯವರ ಎಚ್ಚರಿಕೆಯನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಾಗಿದೆ.
No comments:
Post a Comment