Search This Blog

Monday 28 April 2014

ವಿಷಯಾಧಾರಿತವಾಗಿರಲಿ                     - ಪ್ರದೀಪ್ ಮಾಲ್ಗುಡಿ
ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳು, ಆಕಾಂಕ್ಷಿತರು ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಮಯದಲ್ಲಿ ಅಭ್ಯರ್ಥಿಗಳು ಸಂಯಮದಿಂದ ವರ್ತಿಸಬೇಕಾಗಿದೆ. ವಿಷಯಾಧಾರಿತವಾಗಿ ಚುನಾವಣಾ ಪ್ರಚಾರವನ್ನು ಕೈಗೊಳ್ಳಬೇಕಾಗಿದೆ. ಪ್ರಜಾಪ್ರಭುತ್ವದ ಘನತೆಯನ್ನು ಹೆಚ್ಚಿಸುವ ಹೊಣೆ ಈ ಜನಪ್ರತಿನಿಧಿಗಳ ಮೇಲಿದೆ. ಆದ್ದರಿಂದ ಏನಕೇನಪ್ರಕಾರೇಣ ಗೆಲ್ಲುವ ಪ್ರಯತ್ನದಲ್ಲಿ ಎದುರಾಳಿಗಳ ವೈಯಕ್ತಿಕ ಬದುಕನ್ನು ಬೀದಿಗೆ ತರಬಾರದು. ಅತ್ಯಂತ ದೊಡ್ಡ ಪ್ರಜಾತಂತ್ರ ವ್ಯವಸ್ಥೆ ಎಂದು ಕೇವಲ ಹೇಳಿಕೊಳ್ಳುವಷ್ಟಕ್ಕೆ ಸೀಮಿತವಾಗುವ ಬದಲು, ಜಗತ್ತಿಗೆ ಮಾದರಿ ಜನತಂತ್ರವೆಂದು ನಮ್ಮ ಪ್ರತಿನಿಧಿಗಳು ಸಾಬೀತು ಪಡಿಸಬೇಕಾಗಿದೆ.
ಕಳೆದ ಲೋಕಸಭಾ ಅವಧಿಯಲ್ಲಿ ನಡೆದಿರುವ ಅಸಂಸದೀಯ ಘಟನಾವಳಿಗಳು ಭಾರತದ ಸಂಸತ್‌ನ ದುರವಸ್ಥೆಯನ್ನು ಎತ್ತಿತೋರಿಸಿದೆ. ಈಗಲೆ ಅಭ್ಯರ್ಥಿಗಳು ತಮ್ಮ ಮೇಲೆ ಸ್ವಯಂ ನಿಯಂತ್ರಣವನ್ನು ಹಾಕಿಕೊಂಡು ಸಫಲರಾದಲ್ಲಿ ಇಂತಹ ಘಟನೆಗಳು ಮತ್ತೆ ಲೋಕಸಭೆಯಲ್ಲಿ ಮರುಕಳಿಸಲಾರವು. ಈಗ ದಿನದ ಇಪ್ಪತ್ನಾಲ್ಕು ಗಂಟೆಯೂ ಮಾಧ್ಯಮಗಳ ಹಾಗೂ ಚುನಾವಣಾ ಆಯೋಗದ ಕಣ್ಣು ತೆರೆದಿರುವುದನ್ನು ಗಮನದಲ್ಲಿಟ್ಟುಕೊಂಡಾದರೂ ಈ ಚುನಾವಣೆ ವಿಷಯಾಧಾರಿತವಾಗಿ ನಡೆಯಬೇಕಾಗಿದೆ.

No comments:

Post a Comment