Search This Blog

Monday 28 April 2014

ಚುನಾವಣಾ ವೆಚ್ಚ ಮಿತಿ ಮೀರದಿರಲಿ                                
                                                                                                                                    - ಪ್ರದೀಪ್ ಮಾಲ್ಗುಡಿ
ಕರ್ನಾಟಕದಲ್ಲಿ ಸಮಾಜವಾದಿ ಶಾಂತವೇರಿ ಗೋಪಾಲಗೌಡ ಹಾಗೂ ಮಾಜಿ ಶಿಕ್ಷಣ ಸಚಿವ ಎಚ್.ಜಿ.ಗೋವಿಂದೇಗೌಡರು ನಡೆಸಿದ ಪ್ರಾಮಾಣಿಕ ಚುನಾವಣಾ ಪ್ರಚಾರಗಳು ಇಂದು ಸಾಧ್ಯವೇ ಇಲ್ಲವಾಗಿರುವುದು ದುರಂತವಾಗಿದೆ. ಶಾಂತವೇರಿ ಗೋಪಾಲಗೌಡರು ಚುನಾವಣೆಗೆ ನಿಂತಾಗ ಜನರೇ ಅವರಿಗೆ ಹಣ ನೀಡಿ ಮತ ಹಾಕಿದ ಉದಾಹರಣೆ ಕರ್ನಾಟಕದಲ್ಲಿದೆ. ಅದರ ಜೊತೆಗೆ ಜಾತಿ, ಅಧಿಕಾರ, ಹಣ, ತೋಳ್ಬಲಗಳು ಮೆರೆದ ಅನೇಕ ಚುನಾವಣೆಗಳಿಗೂ ಕರ್ನಾಟಕ ಸಾಕ್ಷಿಯಾಗಿದೆ.
ಲೋಕಸಭಾ ಚುನಾವಣಾ ವೆಚ್ಚದ ಮೇಲೆ ಕೇಂದ್ರ ಚುನಾವಣಾ ಆಯೋಗ ತೀವ್ರ ನಿಗಾ ವಹಿಸುವುದಾಗಿ ಈಗಾಗಲೇ ಪ್ರಕಟಿಸಿದೆ. ಸ್ವಯಂ ನಿಯಂತ್ರಣ ಹಾಕಿಕೊಳ್ಳದೆ ಈ ಕ್ರಮ ಜಾರಿಗೆ ಬರುವುದು ಅನುಮಾನಾಸ್ಪದವಾಗಿದೆ. ಈಗಿನ ನಿಯಮದ ಪ್ರಕಾರ ಎಪ್ಪತ್ತು ಲಕ್ಷ ರೂ.ಗಳ ಮಿತಿ ಇದೆ. ಆದರೆ ಇಷ್ಟರಲ್ಲಿ ಪ್ರಾಮಾಣಿಕವಾಗಿ ಚುನಾವಣೆ ನಡೆಸುವ ಯಾವ ರಾಜಕಾರಣಿಯೂ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೆನಿಸುತ್ತದೆ. ಉದಾಹರಣೆಗೆ ಅಧಿಸೂಚನೆ ಹೊರಟ ದಿನದಿಂದ ದಿನಕ್ಕೆ ಕಡಿಮೆಯೆಂದರು ಹತ್ತು ಲಕ್ಷ ರೂಪಾಯಿಗಳ ಖರ್ಚನ್ನು ಮಾಡಿದರು ಒಂದು ವಾರಕ್ಕೆ ಈಗಿನ ಮೊತ್ತ ಏನಕ್ಕೂ ಸಾಲದು. ಆದರೆ ಇಷ್ಟೇ ವೆಚ್ಚ ಮಾಡಬೇಕೆಂಬ ನಿಯಮದ ಜೊತೆಗೆ ಚುನಾವಣಾ ಆಯೋಗ ಇನ್ನೂ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅದೆಂದರೆ, ಅಧಿಸೂಚನೆ ಹೊರಡುವ ದಿನಕ್ಕೂ ಚುನಾವಣೆ ನಡೆಯುವ ದಿನಕ್ಕು ತುಂಬಾ ಅಂತರ ಇರಬಾರದು. ಹಾಗೆ ಯೋಜಿಸಿದಲ್ಲಿ ಅಭ್ಯರ್ಥಿಗಳ ವೆಚ್ಚದ ಮೇಲೆ ತಂತಾನೆ ನಿಯಂತ್ರಣ ಬೀಳಬಹುದು. ಇಂತಹ ನಿರ್ಣಯಗಳನ್ನು ಇನ್ನು ಮುಂದಾದರೂ ಆಯೋಗ ವಿವೇಚಿಸಿ ಕೈಗೊಳ್ಳಬೇಕಾಗಿದೆ.


No comments:

Post a Comment