Search This Blog

Monday 28 April 2014

ಶಾಂತಿಯುತ ಮತದಾನ ಅಗತ್ಯ                                       - ಪ್ರದೀಪ್ ಮಾಲ್ಗುಡಿ
ಲೋಕಸಭಾ ಚುನಾವಣೆಯನ್ನು ಮುಕ್ತ ಹಾಗೂ ಶಾಂತಿಯುತವಾಗಿ ನಡೆಸಲು ಅಗತ್ಯವಾದ ಕಟ್ಟುನಿಟ್ಟಿನ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಬಹುತೇಕ ರಾಜಕಾರಣಿಗಳ ತೆಕ್ಕೆಯಲ್ಲಿರುವ ರೌಡಿಗಳನ್ನು ಚುನಾವಣಾ ಸಂದರ್ಭದಲ್ಲಿ ತಮ್ಮ ಪರವಾಗಿ ಬಳಸಿಕೊಳ್ಳುವ ಸಾಧ್ಯತೆಗಳು ದಟ್ಟವಾಗಿರುತ್ತವೆ. ಇಂತವರು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತ ಮತದಾನದ ಪ್ರಕ್ರಿಯೆಯೆಗೆ ಅಡ್ಡಿಯನ್ನುಂಟು ಮಾಡಬಹುದು.
ಮತದಾರರನ್ನು ಮತಗಟ್ಟೆಗೆ ಬಾರದಂತೆ ತಡೆಯುವ, ಇಂತಹವರಿಗೇ ಮತದಾನ ಮಾಡಿ ಎಂದು ಬೆದರಿಸುವ, ಮತಗಟ್ಟೆಗೆ ಬಾರದವರ ಹೆಸರಿನಲ್ಲಿ ತಾವೇ ಮತಹಾಕುವ ಹಾಗೂ ಮತದಾರರಿಗೆ ಆಮಿಷವೊಡ್ಡುವ ಕ್ರಿಯೆಗಳು ಇಂತಹ ಸಂದರ್ಭದಲ್ಲಿ ಹೊಸದಲ್ಲ. ಅಲ್ಲದೇ ಚುನಾವಣಾ ಅಕ್ರಮದ ಭಾಗವಾದ ಹಣ ವಿತರಿಸುವ, ಬಟ್ಟೆ ಇನ್ನಿತರೆ ದಿಬಳಕೆಯ ವಸ್ತುಗಳನ್ನು ಹಂಚುವ, ಮದ್ಯವನ್ನು ಮತದಾರರಿಗೆ ಹಂಚುವ, ಚುನಾವಣೆಗಾಗಿ ಮತದಾರರನ್ನು ಕರೆತರುವುದರ ಮೂಲಕ ಸಂಭವಿಸುವ ಅಕ್ರಮಗಳನ್ನು ತಡೆಯಲೇಕಾಗಿದೆ. ಇಂತಹ ಕೆಲಸಗಳಿಗೆಲ್ಲ ರೌಡಿಶೀಟರ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಕರ್ನಾಟಕದ ಕೆಲ ವರ್ಷಗಳ ಹಿಂದಿನ ಕೆಲವು ಜನಪ್ರಿಯ ಮುಖ್ಯಮಂತ್ರಿಗಳಿಂದ ಹಿಡಿದು ಈಗಿನ ಅನೇಕ ರಾಜಕಾರಣಿಗಳು ಇಂತಹವರೊಡನೆ ಉತ್ತಮ ಸಂಬಂಧ ಹೊಂದಿರುವುದು ಸ್ವತಃ ಪೊಲೀಸ್ ಇಲಾಖೆಗೆ ಗೊತ್ತಿರುವ ವಿಷಯ.
ಇಂತಹ ಸಂದರ್ಭದಲ್ಲಿ ಅಂತವರ ಬಳಿ ಇರುವ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು, ಮುಂಜಾಗ್ರತಾ ಕ್ರಮವಾಗಿ ಅವರನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳುವ ಕೆಲಸವನ್ನು ಆದಷ್ಟು ಶೀಘ್ರವಾಗಿ ಕೈಗೊಳ್ಳಬೇಕಾಗಿದೆ.

No comments:

Post a Comment