Search This Blog

Monday 28 April 2014

ಶಾಲಾ - ಕಾಲೇಜುಗಳ ಜಾಗ ಪರಭಾರೆಯಾಗದಿರಲಿ                                       - ಪ್ರದೀಪ್ ಮಾಲ್ಗುಡಿ
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಮುತ್ತಂಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗುಡಿತಾಂಡದ ಬಳಿ ಇರುವ ಶಾಲೆಯೊಂದರಲ್ಲಿ ಗ್ರಾಮಸ್ಥರು ಭಜನೆ ಮಾಡುತ್ತಿರುವುದು ವರದಿಯಾಗಿದೆ. ಶಾಲಾ ಕಾಲೇಜುಗಳ ಸ್ಥಳವನ್ನು ಈ ರೀತಿ ದುರ್ಬಳಕೆ ಮಾಡಿಕೊಳ್ಳುವಂತವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕಾಗಿದೆ. ಸರ್ಕಾರಗಳು ಕಳೆದ ಹತ್ತು ವರ್ಷಗಳಿಂದ ಪ್ರತಿವರ್ಷ ಸರಾಸರಿ ೨೦೦೦೦ ಕೋಟಿಯಷ್ಟು ಹಣವನ್ನು ಶಿಕ್ಷಣ ಕ್ಷೇತ್ರಕ್ಕಾಗಿ ಮೀಸಲಾಗಿಡಲಾಗುತ್ತಿದೆ. ಆದರೆ, ದಿನದಿಂದ ದಿನಕ್ಕೆ ಕರ್ನಾಟಕದ ಶೈಕ್ಷಣಿಕ ಪ್ರಗತಿ ಕುಂಟಿತವಾಗುತ್ತಿರುವುದನ್ನು ಅನೇಕ ವರದಿಗಳು ಬಹಿರಂಗಗೊಳಿಸಿವೆ.
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಪಡೆದಿರುವ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನೂ ಓದಲಾರರೆಂಬ ಈ ವರದಿಯ ಅಂಶಗಳನ್ನು ಶಿಕ್ಷಣ ಸಚಿವರು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಶಿಕ್ಷಣ ತಜ್ಞರು, ಪೋಷಕರು ಹಾಗೂ ಶಿಕ್ಷಕರು ಗಂಭೀರವಾಗಿ ಪರಿಗಣಸಬೇಕಾಗಿದೆ ಮತ್ತು ಇಂತಹ ಕೆಲಸಗಳ ವಿರುದ್ಧ ತುರ್ತಾಗಿ ಅಗತ್ಯ ಕ್ರಮಗಳನ್ನು ಜಾರಿಗೊಳಿಸಬೇಕಾಗಿದೆ.

No comments:

Post a Comment