Search This Blog

Monday 28 April 2014

  ನ್ಯಾಯಮೂರ್ತಿಗಳ ನೇಮಕವಾಗಲಿ
                                                                                                                                 - ಪ್ರದೀಪ್ ಮಾಲ್ಗುಡಿ
ಬೆಂಗಳೂರು, ಧಾರವಾಡ ಮತ್ತು ಗುಲ್ಬರ್ಗಾ ಹೈಕೋರ್ಟ್‌ನ ನ್ಯಾಯಪೀಠಗಳಲ್ಲಿ ಹನ್ನೆರಡು ನ್ಯಾಯಮೂರ್ತಿಗಳ ಹುದ್ದೆಗಳು ಖಾಲಿಯಿವೆಯೆಂದು ವರದಿಯಾಗಿದೆ. ತ್ವರಿತ ನ್ಯಾಯದಾನದ ವಿಳಂಬಕ್ಕೆ ಇದು ಕಾರಣವಾಗಲಿದೆ. ಆದ್ದರಿಂದ ಉಚ್ಛನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಈ ಕುರಿತು ಶೀಘ್ರವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೆಂದರೆ ಅನವಶ್ಯಕ ವಿಳಂಬ ಎಂಬ ತಪ್ಪು ತಿಳುವಳಿಕೆ ಇದೆ. ಇದನ್ನು ಇಲ್ಲವಾಗಿಸಲು ಸೂಕ್ತ ಕ್ರಮದ ಅಗತ್ಯವಿದೆ. ಸರ್ಕಾರಗಳ ವಿಳಂಬನೀತಿಯ ಕುರಿತು ಆಗಾಗ ಚಾಟಿ ಬೀಸುತ್ತಿರುವ ಕೋರ್ಟ್‌ಗಳು ನ್ಯಾಯದಾನ ವಿಳಂಬವನ್ನು ತಮ್ಮ ಕರ್ತವ್ಯಲೋಪವೆಂದು ಪರಿಗಣಿಸದಿರುವುದು ಪ್ರಸ್ತುತ ಸಮಸ್ಯೆಗೆ ಕಾರಣವಾಗಿದೆ. ಇತ್ತೀಚೆಗೆ ರಾಜೀವ್‌ಗಾಂಧಿಯವರ ಕೊಲೆಯಲ್ಲಿ ಮರಣದಂಡನೆಗೆ ಗುರಿಯಾದವರನ್ನು ಈ ಶಿಕ್ಷೆಯಿಂದ ಬಿಡುಗಡೆಗೊಳಿಸಲಾಗಿತ್ತು. ಅದಕ್ಕೆ ಕಾರಣ ನೀಡಿದ ಈ ವಿಷಯಕ್ಕೆ ಸಂಬಂಧಿಸಿದೆ. ಕ್ಷಮಾಧಾನಕ್ಕೆ ಅರ್ಜಿ ಸಲ್ಲಿಸಿದ ಈ ಆರೋಪಿಗಳ ಅರ್ಜಿಯನ್ನು ವಿಲೇವಾರಿ ಮಾಡಲು ಸುದೀರ್ಘ ಕಾಲವನ್ನು ತೆಗೆದುಕೊಳ್ಳಲಾಗಿತ್ತು. ಇದರಿಂದಾಗಿ ಈ ಆರೋಪಿಗಳ ಜೀವನವು ದಶಕಗಳಷ್ಟು ಕಾಲ ಜೈಲಿನಲ್ಲಿ ಕಳೆದಿತ್ತು. ಈ ವಿಳಂಬವನ್ನು ಉಲ್ಲೇಖಿಸಿದ ತಮಿಳುನಾಡಿನ ಹೈಕೋರ್ಟ್ ಇವರನ್ನು ಖುಲಾಸೆಗೊಳಿಸಿತ್ತು.
ನ್ಯಾಯದಾನ ಎನ್ನುವುದು ಸಾಮಾನ್ಯ ಕೆಲಸವೇನಲ್ಲ. ಬೃಹತ್ ರಾಷ್ಟ್ರದಲ್ಲಿ ಈ ಕೆಲಸ ಇನ್ನು ತ್ರಾಸದಾಯಕ. ಅಪರಾಧಿ, ಆಪಾದಿತ, ಆರೋಪಿ, ಸಾಕ್ಷಿಗಳು, ವಾದ, ಪ್ರತಿವಾದ ಹಾಗೂ ಇವುಗಳೆಲ್ಲದರ ಸೂಕ್ಷ್ಮ ವಿಶ್ಲೇಷಣೆಯ ನಂತರ ಮಾತ್ರ ನ್ಯಾಯನಿರ್ಣಯ ಮಾಡುವ ಕೆಲಸವನ್ನು ನ್ಯಾಯಮೂರ್ತಿಗಳು ಮಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ನ್ಯಾಯದಾನವು ಅತಿ ವಿಳಂಬಕ್ಕೆ ಈಡಾಗಿದೆ. ಅದಕ್ಕೆ ಅನೇಕ ಕಾರಣಗಳಿವೆ. ನ್ಯಾಯಾಲಯದ ದಿಕ್ಕು ತಪ್ಪಿಸಲು ಆರೋಪಿಗಳು ಅನೇಕ ತಂತ್ರಗಳನ್ನು ಅನುಸರಿಸುತ್ತಾರೆ. ಅನಾರೋಗ್ಯದ ಸಮಸ್ಯೆ ಇಂತಹವರಿಗೆ ಸುಲಭವಾಗಿದೆ. ಅದಲ್ಲದೆ ತಮ್ಮ ಪರ ವಾದಿಸುವ ವಕೀಲರು ಇಂದು ಬಂದಿಲ್ಲ, ಆದ ಕಾರಣ ನಮ್ಮ ವಿಚಾರಣೇಯನ್ನು ಮುಂದೂಡಿ ಎಂದು ಮನವಿ ಸಲ್ಲಿಸಲಾಗುತ್ತದೆ. ಸಬೃಹತ್ ನ್ಯಾಯ ಅದಾಲತ್ ಹಾಗೂ ಕೌಟುಂಬಿಕ ನ್ಯಾಯಾಲಯಗಳಲ್ಲಿ ತ್ವರಿತ ವಿಚಾರಣೆ ಹಾಗೂ ತೀರ್ಪಿನ ಕುರಿಒತು ಈಗಾಗಲೆ ಕೋರ್ಟ್ ಅನೇಕ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ಈ ಕ್ರಮಗಳಿಗೆ ಸೂಕ್ತವಾದ ನ್ಯಾಯಮೂರ್ತಿಗಳ ಕೊರತೆಯನ್ನು ನೀಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.                                                                                                                   

No comments:

Post a Comment